ಕಸಾಯಣ
ಸರಸೂ ..! ಇಲ್ ಕೇಳೆ ಇನ್ನು ಕಸದ ಸಮಸ್ಯೆ ಪರಿಹಾರವಾಗುತಂತೆ ಕಣೆ ..! ಇವರು ಕೈಯಲ್ಲಿ ಎರಡು ಕಸದ ಬುಟ್ಟಿ ಹಿಡ್ದು ಮನೆ ಒಳಗಡೆ ಅಡಿ ಇಡುತ್ತ ಹೇಳಿದರು .
ಕಸದ ವಿಷಯ ಬಂದ ತಕ್ಷಣ ರಸಂ ಮಾಡು ತ್ತಿದವಳು ಹೊರಗೋಡಿ ಬಂದೆ .
ನಮ್ಮ ಮನೆಯ
ಮುಂದಿನ ರಾಶಿ ಕಸ ವಾರಗಟ್ಟಲೆ ವಿಲೇವಾರಿ ಆಗದೆ , ಈ ದುರ್ನಾತಕ್ಕೆ ನಮ್ಮ ಮೂಗು ಒಗ್ಗಿ ಹೋಗುವ ಪರಿಸ್ಥಿ ತಿ ಬಂದಿತ್ತು .
ಇನ್ನು ಫಿನಾಯಿಲ್ , ಉಪ್ಪಿನ ಕಾಯಿ , ಪ್ಲಾಸ್ಟಿಕ್ ಡಬ್ಬ ಮಾರೋ ಸೇಲ್ಸ್ ಹುಡುಗಿಯರು , ಅನಾಥಾಶ್ರಮ , ಮಣ್ಣು ಮಸಿ
ಅಂತ ಚಂದ ಎತ್ತುವವರು ನಮ್ಮ ಮನೆಯ ಆಲ್ಸ್ಹೆಶಿಯನ್ ನಾಯಿಗೂ ಹೆದರದೆ ,ಆಗಾಗ ಬಂದು ಕಾಡು ತ್ತಿದ್ದವರು ಈ
ವಾಕರಿಕೆ ಬರಿಸುವ ಕಸದ ದುರ್ನಾತಕ್ಕೆ ಹೆದರಿ ನಮ್ಮ ಮನೆ ಕಡೆ ಹಾಯ್ದಿರಲಿಲ್ಲ ! ಇನ್ನು ಇದು ಸಾಲದು ಅಂತ ನಮ್ಮ ಓಣಿಯ ಎದುರಿನ ಚರಂಡಿಯ ವಾಲ್ವ್ ಒಡೆದು ಇದರಿಂದಲೂ
ಒಂದು ಗಬ್ಬು ನಾಥ ಬೇರೆ , ಹೀಗಾಗಿ ಈ
ಕಾಕ್ಟೇಲ್ ವಾಸನೆಗೆ , ನಮಗೆ ಡ್ರಿಂಕ್ಸ್
ಹಾಕದೆ ತಲೆ ತಿರುಗಿ ಬೀಳುವಂತೆ ಅಮಲೇ ರಿರುತ್ತಿತ್ತು . ! ಇನ್ನ್ನು
ಪಾಪ ಓಣಿಯ ಜನರು ಹೊರತಾಗಿ ಹೊರಗಿನವರು
ಬರಲೇಬೇಕಾದ ತುರ್ತು ಪರಿಸ್ತಿತಿ ಇದ್ದರಷ್ಟೇ
ಈ ಕಡೆ ಹಾಯುವ ಧೈರ್ಯ ಮಾಡಿಯಾರು .
ನನ್ನ ಯೋಚನೆಗೆ ಕಡಿವಾಣ ಹಾಕುತ್ತ “ ಏನ್ರಿ ಅದು
ಏನೋ ಕಸ ವಿಲೇವಾರಿ ಬಗ್ಗೆ ಹೇಳ್ತಾ
ಇದ್ದರಲ್ಲ , ಸ್ವಲ್ಪಾ ಸರಿಯಾಗ ಹೇಳ್ರಿ ಗೋಗರೆದೆ
. ಇವರು ಬಾಯಿ ತೆರೆಯುವಸ್ತ್ರಲ್ಲಿ ನನ್ನ
ಫೋನು ರಿಂಗಣಿಸಿತು . ಆ ಕಡೆ ಯಿಂದ ನನ್ನ ತಂಗಿ ಮಗ ಶ್ರೀಕಾಂತು ದ್ವನಿ ಗೆ ನನ್ನ
ಮುಖದಲ್ಲಿ 70 mm ಸ್ಮೈಲ್ ನೋಡಿಯೇ ಇವರು
ಊಹಿಸರಬೇಕು , ನನ್ನ ಆತ್ಮೀಯ ರದೇ ಕಾಲು ಅಂತ . ಚನ್ನಗಿದ್ದೀರ ಚಿಕ್ಕಮ್ಮ? , ಮಾವ
ಹೇಗಿದ್ದಾರೆ ? ಕುಶಲೋಪಚರಿಗಳಾದ ಮೇಲೆ ಮುಖ್ಯ ಪ್ರಶ್ನೆ ಗೆ ಬಂದ . ಚಿಕ್ಕಮ್ಮ ನಿಮ್ಮ ಮನೆ ಎದುರ ಗಡೆ ಕಸ ಎಲ್ಲ ವಿಲೇವಾರಿ ಆಯ್ತಾ ?
ನಾನು ,ಯಾಕಪ್ಪ ಶ್ರೀಕಾಂತು ಹಾಗ ಕೇಳ್ತಾ ಇದ್ದೀಯ ? ಅಂತ
ಕ(ಸ)ಸಿವಿಸಿ ಯಿಂದಲೇ ಸವಾಲೆಸೆದೆ . ಏನಿಲ್ಲ
ಚಿಕ್ಕಮ್ಮ ನನ್ನ ಮಗನ ಉಪನಯನದ ಆಮಂತ್ರಣ
ನಿಮಗೆ ಕೊಟ್ಟು ಹೋಗೋಣ ಅಂತ
ಅನ್ನಕೊಂಡಿದ್ದಿವಿ .ಇನ್ನೂ ಕಸ ಹಾಗೆ ಇದ್ದರೆ
ದಯವಿಟ್ಟು ಕ್ಸಮಿಸಿ .ಇಲ್ಲೇ ಫೋನಲ್ಲೇ ಕರೆದು ಬಿಡ್ತೀನಿ , ಯಾಕಂದ್ರೆ ನಂಗೆ
ಕಸ , ಧೂಳು ಅಂದ್ರೆ ಕೆಮ್ಮು , ಇನ್ನು ನನ್ನ ಹೆಂಡತಿ ಸೀತೆ ಗೆ ನಿಮಗೆ ಗೊತಲ್ಲ ದಮ್ಮು ,ಹಾಗಾಗಿ ಆಕಡೆ ಬಂದ್ರೆ ಎರಡು ಜಾಸ್ತಿ ಅಗತ್ತೆ ಅದಕ್ಕೆ ..! ನಾನು ನಿಟ್ಟುಸಿರು ಬಿಡುತ್ತ ಆಯ್ತಪ್ಪ ಹಾಗೆ ಮಾಡು , ಕಸ ಎಲ್ಲ ಖಾಲಿ ಆಗಿ ಕ್ಲೀನ ಮಾಡಿದ್ಮೇಲೆ ನಾನೇ ಫೋನ್ ಮಾಡ್ತಿನಿ , ಸಂಸಾರ ಸಮೇತ ಬಂದು ಹೋಗು ಅಂತ ಫೋನ್
ಕುಕ್ಕುತ್ತ “ ಥೂ ! ಏನ್ರಿ ಇದು ...ಇ ಹಾಳು ಕಸ ನಮ್ಮ ಮಾನ ಮರ್ಯಾದೆ ಎಲ್ಲಾ ತಗೀತಾ ಇದ್ಯಲ್ಲ
...ಇನ್ನು ಎಷ್ಟು ದಿನ ಅಂತ ಇಂಥ (ನಾಯಿ)
ಪಾಡು , .ಈ ಕಸದ ಸಮಸ್ಯೆ ಬಗೆಹರಸ್ಲಿಕ್ಕೆ ಪಾಲಿಕೆ
ಸೂಕ್ತ ಕ್ರಮ ತೊಗೋತೀವಿ ಅಂತ ಹೇಳ್ತಾ ಇದ್ಯಲ್ಲ ,ಅದೇನ್ ಕ್ರಮಾ ನೋ.. ಕರ್ಮಾನೋ
ಗೊತ್ತಿಲ್ಲ , ಈ ಸೂಕ್ತ ಕ್ರಮ ಸೂತಕ ಕ್ರಮ ಆಗಬಾರದು ಅಷ್ಟೇ !. ಇನ್ನು ಈ ಮೇಯರು /ಕಾರ್ಪೋರೇಟರ ಗಳು ಏನ್ ನಿದ್ದೆ ಮಾಡ್ತಾ ಇದ್ದಾರ ? ತಮ್ಮ
ಏರಿಯಾದ ಕಾರ್ಪೊರೇಟರ್ ಮನೆ ಮುಂದೆ ಜನ ತಮ್ಮ ತಮ್ಮ ಮನೆಯ ಕಸದ ಬುಟ್ಟಿ (ಕಸದ ಸಮೇತ ) ತಂದು ಇವರ ಮನೆ ಮುಂದೆ
ಸುರಿದು ಪ್ರತಿಭಟನೆ ಮಾಡ್ಬೇಕು ಕಣ್ರೀ ಆಗ ಗೊತ್ತಾಗತ್ತೆ . ಇನ್ನು ಆ ಮಂಡೂರಿನ ಜನ ಕಸದ ಲಾರಿ ಕಂಡ್ರೆ ಸಾಕು ಕೆಂಡ ಕಾರಿ ಲಾರಿಗಳ ಮೇಲೆ ಕಲ್ಲೆಸ್ದು ಪಾಲಿಕೆ ನೌಕರರ ಮೇಲೂ ಹಲ್ಲೆ ನಡೆಸಿ , ಒಡಸ್ತಾ ಇದ್ದಾರಂತೆ ! ಅದೇನೋ ಈಗ ಮುಂಜಾಗ್ರತೆ ಕ್ರಮ
ಅಂತ ಕಸದ ಲಾರಿಯ ಜೊತೆ ರಕ್ಷಣೆಗೆ ಅಂತ ಪೋಲೀಸ್ ವ್ಯಾನ್ ಬೇರೆ ಕೇಡು ! ಇನ್ನು ಇವರಿಗೂ
ಮೋದಿ ,ಜಯಲಲಿತಾರಂತೆ “ ಜೆಡ್ “ ಕ್ಯಾಟಗರಿ
ರಕ್ಷಣೆ ಕೊಡೋ ದಿನಗಳು ಬಂದರೂ ಬರಬಹುದು !! ಕಸ ಹಾಕಲು ಏನ್ ಕಸರತ್ತು ಏನ್ ಕಥೆ
.ಛೆ ..! ಆಗ ಬೆಂಗಳೂರು ಅಂದ್ರೆ ಗಾರ್ಡೆನ್ ಸಿಟಿ
ಅಂತಾ ಇದ್ರು , ಈಗ ಗಾರ್ಬೇಜ್ ಸಿಟಿ ಅನ್ನು ಹಾಗೆ ಆಗ್ಬಿಟ್ಟಿದೆ ....ಅಲ್ಲಾರೀ ಈ
ಹಾಳು ಕಸದ ಮೇಲೆ ಮಳೆ ಸುರಿದು ಸೊಳ್ಳೆಗಳು ತಾಂಡವಾಡ್ತಾ ಇವೆ .ಇನ್ನು ನಮಗೂ ಡೆಂಗೂ ಜ್ವರ ಬಂದು ನಮ್ಮ ವಿಲೇವಾರಿ ಆಗ್ಬಿಟ್ರೆ ಅಂತ ಭಯ
ಶುರುವಾಗಿ ಬಿಟ್ಟಿದೆ ರೀ ..ಅಂತೂ
.ಜನ ಸಾಮಾನ್ಯರ ಸಮಸ್ಯೆ ಈ
ಸರ್ಕಾರಕ್ಕೆ ಕಾಲು ಕಸ ಆಗ್ಹೋಗಿದೆ ....
ನನ್ನ ಕಿರುಚಾಟಕ್ಕೆ ಇವರು ಬ್ರೇಕ್ ಹಾಕಿ ...” ಅಯ್ಯೋ ಸರಸು ! ಇದರ ಬಗ್ಗೆನೇ ನಿನಗೆ
ಆಗಲೇ ಹೇಳ್ಬೇಕು ಅಂತ ಇದ್ದಿದ್ದು . ಇಲ್ ನೋಡು ಇನ್ನ್ಮೇಲೆ ಪಾಲಿಕೆ ಆಧುನಿಕ
ತಂತ್ರಜ್ಞ್ಯಾನ ಬಳಸಿ ಕಸ ವಿಲೇವಾರಿನ ಹೈಟೆಕ್ ಮಾಡ್ತಾರಂತೆ
! .ಪೇಪರನಲ್ಲಿ ಸುದ್ದಿ ಬಂದಿದೆ ಕಣೆ ! ಬೆಂಗಳೂರಿನ ಯಾವ ಏರಿಯಾ ದಲ್ಲಿ ಕಸದ ರಾಶಿ ಇದ್ದರೂ ಪಾಲಿಕೆಯ ಅಧಿಕಾರಿಗಳು
ಅದನ್ನ ಆನ ಲೈನ್ ಮೂಲಕವೆ ನೋಡಬಹುದಂತೆ ! ಅವರು ತಕ್ಷಣ ಅಲ್ಲಿಗೆ ಗಾಡಿ ಕಳಿಸಿ ಕಸ ಎಲ್ಲಾ ವಿಲೇವಾರಿ ಮಾಡ್ಸಿಬಿಡ್ತಾರಂತೆ !
ನನಗೆ ಒಟ್ಟಿನಲ್ಲಿ
ಕಸದ ದುರ್ನಾತಕ್ಕೋ ಅಥವಾ ಇವರು ಹೇಳಿದನ್ನು ನಂಬಲಾಗದೆ ಮೂಗಿನ ಮೇಲೆ ಬೆರಳು ಅಲ್ಲ ಕರ್ಚೀಪ್
ಇಟ್ಟುಕೊಳ್ಳುವಂತಾಯಿತು . ನಾನು “ ಅಯ್ಯೋ
ಬಿಡಿ ಇದೆಲ್ಲ ಆಗಲ್ಲ ಬಿಡಲ್ಲ ..ಈ ಅಧಿಕಾರಿಗಳಿಗೆ ಕಸದ ರಾಶಿ ಯ ಫೋಟೋ ಜೊತೆ ಅದರ ಗಬ್ಬು ನಾತ ಕೂಡ ಕಂಪ್ಯೂಟರ್ ನಲ್ಲೇ ಬಂದು ಅವರ ಮೂಗಿಗ್ ಬಡಿಬೇಕು ಕಣ್ರೀ ..ಆಗ ಏನಾದ್ರೂ ಕ್ರಮ ತೊಗೊಳ್ತಾರೆ
ಅನ್ಸತ್ತೆ ! ಅಂತ ಸಿಟ್ಟು ಕಾರಿಕೊಂಡೆ .
ನನ್ನ ಈ ಸೂಪರ್ ಸುಪ್ರೀಂ
ಐಡಿಯಾ ಗೆ ಇವರು ಏನೂ ಹೇಳಲು ತೋಚದೆ ಬೆಕ್ಕಸ ಬೆರಗಾಗಿ
ನನ್ನೇ ನೋಡುತ್ತಾ ನಿಂತರು !.
Arathi Ghatikar
ಚೆನಾಗಿದೆ ಕಸಾಯಣ...ನಿಜವಾಗಿಯೂ ಗಂಭೀರವಾದ ಸಮಸ್ಯೆಯನ್ನು ಹಾಸ್ಯದೊಂದಿಗೆ ಹೇಳಿದ್ದೀರಿ...ಚಿಕ್ಕದಾಗಿ ಚೊಕ್ಕದಾಗಿದೆ,...ಓದಲು ಇಷ್ಟವಾಯ್ತು... .
ReplyDeleteಬರೆಯುತ್ತಿರಿ..
ನಮಸ್ತೆ..
:)
ReplyDeleteನಮ್ಮ ದಿನ ನಿತ್ಯದ ಬೆಂಗಳೂರಿಗರ ಗೋಳಿಗೆ ಅಮೋಘವಾಗಿ ಹಾಸ್ಯ ಲೇಪಿತ.
ReplyDeleteಧನ್ಯವಾದಗಳು ಚಿನ್ಮಯ್ , ಬದರಿನಾಥ ಅವರೆ ನಿಮ್ಮ ಅನಿಸಿಕೆ ಗಾಗಿ ,ಅಗಾಗ್ಗ ಬರ್ತಾ ಇರ್ರಿ :)
ReplyDelete