ಆ ವಾರ ನನ್ನದು ಕೊನೆಗಳಿಗೆಯ ಪ್ಯಾಕಿಂಗ್
ಶುರುವಾಗಿತ್ತು . ನನ್ನ ಪತಿ ದುಬೈ ನಗರಿಗೆ ಕೆಲಸದ ನಿಮಿತ್ತ ವಲಸೆ ಹೋಗಿ ಆಗಲೇ ಆರು
ತಿಂಗಳಾಗಿತ್ತು . ಇನ್ನು ನಾವುಗಳು ಆ ವಾರಾಂತ್ಯವೇ ಅಲ್ಲಿಗ್ಗೆ ಹೊರಡುವುದು ಬುಕ್ ಆಗಿತ್ತು .
ಸ್ವಲ್ಪ ಎಕ್ಸಟ್ರಾ ರೊಕ್ಕ ಕೊಟ್ಟರೂ ಪರವಾಗಿಲ್ಲ ನಿನ್ನ ಎಲ್ಲಾ
ಪಾತ್ರೆ /ಪಗಡ , ಕೆಲವು ಆಗತ್ಯ ವಸ್ತುಗಳ ಇಲ್ಲಿ ಸಿಗಲಾದಂಥವು , ತಂದು ಬಿಡು ಅಂತ ನನ್ನ ಗೆಳತಿ ಪುಕ್ಕಟೆ
ಸಲಹೆ ನೀಡಿದ್ದಳು. ಹೀಗಾಗಿ ನನ್ನ ಲಗ್ಗೇಜ್ ನೋಡಿ
ನನಗೇ ಘಾಬರಿ !, ಏರಪೋರ್ಟ್
ಇಲಾಖೆಗೆ ನನ್ನಿಂದ ಬೃಹತ್ ಆದಾಯ ಅಂತ ವಾರದ ಭವಿಷ್ಯ ಕೇಳಿದ ಹಾಗಿತ್ತು ! ನನ್ನ
ದೇವರಗಳನ್ನೂ ( ಪುಷ್ಪಕ ) ವಿಮಾನದಲ್ಲಿ
ಹತ್ತಿಸಲು ದೊಡ್ಡ ಗಂಟೊಂದನ್ನೆ ಮಾಡಿದ್ದೆ , (ಸದ್ಯ ದೇವರ ಮನೆ ಇಲ್ಲೇ ಉಳಿಸಿದ್ದೆ
! ) ,ಹಾಗೇನೆ ಮತ್ತೇನಾದ್ರು ತರಲೆ ಅಂತ ಇವರಿಗೆ ಫೋನಾಯಿಸಿದಾಗ ಇವರಿಗೆ ನನ್ನ ಲಗ್ಗೇಜ್ ವಾಸನೆ ಬಡಿದು ಅಲ್ಲೇ ತಲೆ ಸುತ್ತಿ ಬೀಳುವುದೊಂದೇ ಬಾಕಿ ! ! ನಾನು “ : ರೀ ಮನೇಲಿ ಗಸ ಗಸೆ ತುಂಬಾ ಮಿಕ್ಕಿದೆ , ಅಲ್ಲಿಗೇ ತಂದು ಬಿಡ್ತೀನಿ , ಹೇಗೂ ನಿಮಗೆ ಗಸಗಸೆ ಪಾಯಸ ಅಂದ್ರೆ ಇಷ್ಟ
ಅಲ್ವಾ “ ಅಂದೆ . ಇವರು ತಕ್ಷಣ ಘಾಬರಿಯಿಂದ “
ಆಯ್ಯೋ ಮಾರಾಯ್ತಿ ಮೊದಲು ಅದನ್ನ ಹೊರಗೆ ಎತ್ತಿಡು !
ಈ ದೇಶದಲ್ಲಿ ಗಸಗಸೆ ಯನ್ನ ಡ್ರಗ್ಸ್ ಅಂತ
ಪರಿಗಣಿಸ್ತಾರೆ , (ಗಾಂಜಾ, ಅಫೀಮ್ ಗಳಂತೆ
!) ಹಾಗಾಗಿ ಅದು ಬ್ಯಾನ್ ಪದಾರ್ಥ , ಇಲ್ಲಿ ತರುವ
ಹಾಗಿಲ್ಲ .ಅದೇನಾದ್ರೂ ನಿನ್ನ ಬ್ಯಾಗಲ್ಲಿ ಕಂಡರೆ
ನಿನ್ನನೂ ಒಳಗೆ ಹಿಡಿದು ಹಾಕ್ಬಿಡ್ತಾರೆ ಅಷ್ಟೇ
!” ಅಂದ್ರು , ತಂಪಾದ ಗಸಗಸೆ ತೊಗೊಂಡ
ಹೋಗೋ ಮುಂಚೇನೇ ಇವರು ನನಗೆ ಬಿಸಿಬಿಸಿ ಯಾಗಿ
ಶಾಕ್ ಕೊಟ್ಟಿದ್ರು !
.
.
ಅಂತೂ ನನ್ನ ಬೃಹತ್ ಲಗ್ಗೇಜ್ ಹಾಗು ನನ್ನ
ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ
ದುಬೈ ನಗರಿ ಮುಟ್ಟಿದೆ ..ಹೊಸ ಊರು ,ಹೊಸ ವಾತಾವರಣ ಇಷ್ಟವಾಯಿತು . ಇಲ್ಲಿನ
ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ
ಶಾಪಿಂಗ್ ಮಾಲ್ ಗಳು , /ಮನಮೋಹಕ ಗಗನ
ಚುಂಬಿಗಳು ,ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಹೀಗೆ
...ಎಲ್ಲವನ್ನು ಬೆರಗು ಗಂಣಿನಿಂದ ನೋಡುತ್ತಾ
ಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಂಡೆವು
..
ದುಬೈ ಒಂದು ಬೃಹತ್ ಪ್ರವಾಸಿ ಕೇಂದ್ರ . ಜಗತ್ತಿನಾದ್ಯಂತ ಪ್ರವಾಸಿಗರು ಈ ಮರಳುಗಾಡಿನ ಮಾಯಾ ನಗರಿಯನ್ನ ,ಹಾಗೂ . ಅದರ
ಜಾದೂವನ್ನ ಅನುಭವಿಸಲು ಬರುತ್ತಾರೆ ! ಬಂದ ಹೊಸತರಲ್ಲಿ
ನಾವೂ ವಾರಾಂತ್ಯದಲ್ಲಿ ಇಲ್ಲಿನ ಪ್ರಮುಖ
ಪ್ರವಾಸಿ ಸ್ತಳಗ;ಳಿಗೆ ಭೇಟಿ ನೀಡುವ ಹವ್ಯಾಸ ವಿಟ್ಟು ಕೊಂಡಿದ್ದೆವು . ಹೀಗೆ ಸುತ್ತಾಡಲು ಹೋದಾಗಲೆಲ್ಲಾ ನಮಗೆ, ಪ್ರಪಂಚದ ನಾನಾ ಭಾಗದ ಜನರು , ನನಗೆ ಹೊಸ ರೀತಿಯಂತೆ ತೋರುವ ಅವರ ವೇಷ/ಭೂಷಣಗಳು , ಜೊತೆಗೆ ವಿಭಿನ್ನ ಬಾಷೆಗಳನ್ನ ಮಾತಾಡುತ್ತಾ ಮುಕ್ತವಾಗಿ ಸುತ್ತಾಡುವುದು ಕಂಡುಬರುತ್ತಿತ್ತು . ಇಲ್ಲಿಯ ಸಾಂಪ್ರದಾಯಿಕ ಉಡುಗೆ ಬಗ್ಗೆ ಹೇಳುವುದಾದರೆ ಇಲ್ಲಿನ ಅರಬ ಪುರುಷರು ಶ್ವೇತ ವರ್ಣದ ಅತ್ಯಂತ
ಶುಭ್ರವಾದ ಉದ್ದನೆಯ ನಿಲುವಂಗಿ ,ಧರಿಸುತ್ತಾರೆ . ( ಇದಕ್ಕೆ ಕಂದೂರಾ ಅಥವಾ ದಿಶ್-ದಶಾ ಅಂತಲೂ ಕರೆಯುತ್ತಾರೆ ) , ಹಾಗೆಯೇ ಶಿರದ ಮೇಲೆ ಶ್ವೇತ ವರ್ಣದ ಚೌಕವಾದ ವಸ್ತ್ರವನ್ನ ತ್ರಿಕೋನಾಕಾರದಲ್ಲಿ , ಕೆಲವು ದೇಶದವರು ಕೆಂಪು ಪ್ರಿಂಟ್ನದು , ಹೊದ್ದು ಅದಕ್ಕೆ ಒಂದು ಕಪ್ಪು ಬಣ್ಣದ ಸ್ಯಾಟಿನ್ ಪೈಪಿನಂಥಹದು ಸುತ್ತಿರುತ್ತಾರೆ . ( ನನಗಂತೂ ಇವರ ದಿರಸಿನ ಶುಭ್ರತೆಯನ್ನು ನೋಡಿ ಅಬ್ಬ ನಮ್ಮ ಯಾವುದಾದರೂ ಬಟ್ಟೆ ದಿಟರ್ಜೆಂಟ್ ಜಾಹೀರಾತಿಗೆ
ಇವರೆಲ್ಲ ಹೇಳಿ ಮಾಡಿಸಿದ
ಹಾಗಿದ್ದ್ದಾರೆ ಅನ್ನಿಸದೆ ಇರಲಿಲ್ಲ :) .ಹಾಗೇನೆ ನನ್ನ ಮಕ್ಕಳಿಗೂ ಈ ಆರಬ್ ಉಡುಗೆ
“ ದಿಶ-ದಶಾ “ ಹಾಕಿ ಫೋಟೋ ತಗೆಸಿ ಅತ್ತೆ ಹಾಗು ಅಮ್ಮನಿಗೆ ಕಳಿಸಿದಾಗ
ಒಹ್ ಯಾರೀ ಪುಟ್ಟ ದುಬೈ ಷೇಕ ಅಂತ ಅವರೆಲ್ಲಾ ಖುಷಿ ಪಟ್ಟಿದ್ದರು . ಸದ್ಯ
ಇಲ್ಲಿ ನಾವುಗಳು ಯಾವ ಅಭ್ಯಂತರವಿಲ್ಲದೆ ನಮ್ಮ ಭಾರತದ ಉಡುಗೆ ತೂಡುಗೆಗಳನ್ನು
ಧರಸಿಬಹುದಾಗಿದ್ದು ನನಗೆ ಅತ್ಯಂತ ಸಂತಸ ಕೊಟ್ಟ
ವಿಚಾರ . ಹಾಗೇನೆ ಈ ದೇಶದಲ್ಲಿ ನಮ್ಮ ಭಾರತೀಯರ ಸಂಖ್ಯೆಯೇ ಗಣನೀಯವಾಗಿ ಕಂಡು ಬರುತ್ತದೆ .
ಕೆಲವು ತಿಂಗಳು ಹೊಸ ಊರು ಒಗ್ಗಿದ ನಂತರ , ನಾನೂ
ಇಲ್ಲಿ ಉದ್ಯೋಗಕ್ಕಾಗಿ ಅರಸುತ್ತಾ ,
ಒಳ್ಳೆಯ ಸೂಕ್ತವಾದ ಕಂಪನಿ ಒಂದನ್ನ ಹುಡುಕುವುದರಲ್ಲಿ ಯಶಸ್ವೀ
ಆದೆ , ಅಂತೂ ಒಳ್ಳೆಯ ಕಡೆ ಕೆಲಸ ದೊರೆತು
, ಕಚೇರಿಯ ವೇಳೆಯೂ ಅನುಕೂಲಕರವಾದ್ದರಿಂದ
, ಅಲ್ಲಿಗೇ ಸೇರಲು ನಿರ್ಧರಿಸಿದೆ .
ಆಗ ನಾನು ಕೆಲಸಕ್ಕೆ ಸೇರಿದ ಹೊಸತು . ಮೂಲತಹ ಇದು ಅರಬ್ ಕಂಪನಿ . (ಬ್ರ್ಯಾಂಚ್ ಆಫೀಸು ) ಇನ್ನು ನನ್ನ ಕಚೇರಿಯ ಬಗ್ಗೆ ಹೇಳುವುದಾದರೆ ,
ಅಲ್ಲಿ ಎಲ್ಲರೂ ಅರಬ ಮೂಲದವರು , ಕೆಲವರು
ಬ್ರಿಟಿಶ್ಶ್ ರಿದ್ದರು . ನಾನು ಹಾಗು ಮತ್ತೆ ಇನ್ನೊಬ್ಬರು ಮಲಯಾಳಿ ಇಬ್ಬರೇ ಭಾರತೀಯರು . ಕಚೇರಿಯಲ್ಲಿ ಬಹುಪಾಲು ಸಹದ್ಯೋಗಿಗಳು ಇಸ್ಲಾಂ ಧರ್ಮದವರು . ಅದರಲ್ಲಿ ನಾನೊಬ್ಬಳೆ ಹಿಂದೂ . ಸಾಮನ್ಯವಾಗಿ
ಅರಬರು ಎಲ್ಲಾ ಭಾರತೀಯ ಮೂಲದವರನ್ನ “ ಅಲ್ ಹಿಂದ್ “ ಅಂದು ಕರೆಯುತ್ತಾರೆ !
ಮೊದಮೊದಲು ನಾನು ಅದನ್ನು ಕನ್ನಡೀಕರಿಸಿ ಕೊಂಚ
ಗಲಿಬಿಲಿ ಗೊಂಡಿದ್ದ್ದೂ ಉಂಟು .
ಅಂತೂ ಹಾಗೂ ಹೀಗೂ ಹೊಸ ಕಚೇರಿ ಅನಾಯಾಸವಾಗಿ
ಒಗ್ಗಿತು , ಅಲ್ಲಿ ಎಲ್ಲರೂ ಬಹಳ ಸ್ನೇಹಪರರಾಗಿದ್ದ ಕಾರಣ ಕಚೇರಿಯ ವಾತಾವರಣ ಕ್ರಮೇಣ
ಇಷ್ಟವಾಗತೊಡಗಿತು.
ನಮ್ಮ
ಪ್ರಾಜೆಕ್ಟ್ ಮ್ಯಾನೇಜರ್ ಮೂಲತಹ
ಲೆಬಿನಾನ್ ದೇಶದವರು , ಬಹಳ
ಆತ್ಮೀಯವಾಗಿ ನನ್ನ ಜೊತೆ ಮಾತನಾಡುತ್ತಿದ್ದರು . ಅವರು ಭಾರತಕ್ಕೆ ಬಹಳ ಸಲ ಪ್ರವಾಸಿಗರಂತೆ ಬಂದು ಜೈಪುರ, ಹೈದರಾಬಾದ್ , ಬೆಂಗಳೂರಿಗೂ ಸಹ ಭೇಟಿ
ನೀಡಿದ್ದರಂತೆ , ಅವರ ಅಣ್ಣನ ಮಗ
ಬೆಂಗಳೂರಿನ ಒಂದು ಇಂಜಿನೀರಿಂಗ್
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿಯೂ ತಿಳಿಸಿದ್ದರು . ನಮ್ಮ
ಭಾರತದ ಸಂಸ್ಕೃತಿ , ಪರಂಪರೆ ಯನ್ನ ಬಹಳ
ಮೆಚ್ಚಿಕೊಳ್ತಾ ಇದ್ದರು. . ಹಿಂದಿ ಸಿನಿಮಾಗಳತ್ತ ಅವರ ಒಲವು ಕಂಡೂ ನನಗೂ ಆಶ್ಚರ್ಯ !
ಶಾರುಖ ಖಾನ್ , ಮಾಧುರಿ ದೀಕ್ಷಿತ್ ,
ಸಲ್ಮಾನ್ ಖಾನ್, ಐಶ್ವರ್ಯ ರಾಯ್
ಸಿನಿಮಾಗಳನಂತೂ ತಪ್ಪಿಸುತ್ತಲೇ
ಇರಲಿಲ್ಲಾ . ! ( ಇಲ್ಲಿನ ಸಿನಿಮಾ ಮಂದಿರಗಳಲ್ಲಿ ಹಿಂದಿ ಸಿನಿಮಾಗಳಿಗೆ ಅರೇಬಿಕ್
ಭಾಷೆಯ “ ಸಬ್ ಟೈಟಲ್ಸ್ರ “ (sub
titles ) , ತೋರಿಸುತ್ತಾರೆ . )
ಅವರು
ನನ್ನನ್ನು ಸಂಬೋಧಿಸುವಾಗ ಹಲೋ ಅರ್ರಾ .........ತೀ
ಅಂತ “ ರಾ “ ಅಕ್ಷರವನ್ನ ಎಷ್ಟು ದೀರ್ಘವಾಗಿ ಎಳೀತಾ ಇದ್ದು
ಅಂದ್ರೆ ... ಅದೇ ಸಮಯದಲ್ಲಿ ಒಂದು ಲಾಡು ಆರಾಮವಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು
! ಲಾಡು ಹಾಕೊದಷ್ಟೇ ಅಲ್ಲಾ ,ಅದೇ
ವೇಳೆಗೆ ಅದನ್ನ ಒಂದು ದೊಡ್ಡ ನೊಣ ಬಾಯೊಳಗೆ
ನುಗ್ಗಿ ಆರಾಮವಾಗಿ ತಿಂದು ಹೊರಗೆ
ಬರಬಹುದು .:)
ಇನ್ನು ನಮ್ಮ ಬಿಡುವಿನ ವೇಳೆಯಲ್ಲಿ ನಾವಿಬ್ಬರೂ ಕಾಡ ಹರಟೆ ಅಲ್ಲ ಮರಳುಗಾಡು ಹರಟೆನೂ ಹೊಡೀತಿದ್ವಿ !. ನಮ್ಮ ಹಿಂದೂ ಸಂಸ್ಕೃತಿ /ಪರಂಪರೆ ಗಳು , ನಮ್ಮ ರೂಢಿಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ . ನಾನು ಕೆಲವು ಮಾಹಿತಿಗಳನ್ನು , ವಿಚಾರಗಳನ್ನು ಯಾವಾಗಲಾದರೊಮ್ಮೆ ಅವರು ಕೇಳಿದಾಗ ವಿವರಿಸುತ್ತಿದ್ದರೆ ಅದರ ಬಗ್ಗೆ ಸ್ವಾರಸ್ಯಕರ ವಾದ ಮುಖ ಭಾವ ಹೊತ್ತು ಕೂತೂಹಲದಿಂದ ಆಲಿಸುತ್ತಿದ್ದರು .
ಹಾಗೇನೆ ಅವರ ದೇಶದ ಸಂಸ್ಕೃತಿ , ಆಚಾರ ವಿಚಾರಗಳನ್ನು ,ಅವರ ದೇಶದ ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಲೂ ಇದ್ದರು .
ಇನ್ನು ನಮ್ಮ ಬಿಡುವಿನ ವೇಳೆಯಲ್ಲಿ ನಾವಿಬ್ಬರೂ ಕಾಡ ಹರಟೆ ಅಲ್ಲ ಮರಳುಗಾಡು ಹರಟೆನೂ ಹೊಡೀತಿದ್ವಿ !. ನಮ್ಮ ಹಿಂದೂ ಸಂಸ್ಕೃತಿ /ಪರಂಪರೆ ಗಳು , ನಮ್ಮ ರೂಢಿಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ . ನಾನು ಕೆಲವು ಮಾಹಿತಿಗಳನ್ನು , ವಿಚಾರಗಳನ್ನು ಯಾವಾಗಲಾದರೊಮ್ಮೆ ಅವರು ಕೇಳಿದಾಗ ವಿವರಿಸುತ್ತಿದ್ದರೆ ಅದರ ಬಗ್ಗೆ ಸ್ವಾರಸ್ಯಕರ ವಾದ ಮುಖ ಭಾವ ಹೊತ್ತು ಕೂತೂಹಲದಿಂದ ಆಲಿಸುತ್ತಿದ್ದರು .
ಹಾಗೇನೆ ಅವರ ದೇಶದ ಸಂಸ್ಕೃತಿ , ಆಚಾರ ವಿಚಾರಗಳನ್ನು ,ಅವರ ದೇಶದ ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಲೂ ಇದ್ದರು .
ಇಲ್ಲಿಯವರಿಗೆ ವರ್ಷಕ್ಕೆ
ಎರಡು ದೊಡ್ಡ ಹಬ್ಬ , ಒಂದು ರಮಾದಾನ್ (ರಂಜಾನ್) ಈದ್ , ಅಂದರೆ “ಈದ್ ಅಲ್ ಅದಾ “ ಮತ್ತು ಇನ್ನೊಂದು “ಈದ್ ಅಲ್ ಫಿತರ್ “ ,ನಮಗೋ
ನೂರೆಂಟು ಈದ್ ಗಳು ಆಯಿ ಮೀನ್
ಹಬ್ಬಗಳು :) ಹಾಗಾಗಿ ನಾನು ದೀಪಾವಳಿ .
ಗೌರಿ/ಗಣಪತಿ , ಹೋಳಿ ( ಬಣ್ಣಗಳ ಹಬ್ಬ )
, ದಸರಾ ಹಬ್ಬಗಳಿಗೆ , ಯಾವಾಗಲಾದರೂ ಒಮ್ಮೊಮ್ಮೆ ಅನುಮತಿ ದೊರೆತರೆ ಅರ್ಧ ದಿನ ಆಫೀಸಿಗೆ ರಜೆ ಹಾಕುತ್ತಲಿದ್ದೆ :) ( ಈ ಹಬ್ಬಗಳ ವಿಶೇಷತೆಗಳ ಬಗ್ಗೆನೂ
ಅವರಿಗೆ ಹೇಳಿದಾಗ , ಒಹ್ ನಿಮ್ಮ ಹಬ್ಬಗಳೂ
ತುಂಬಾ ಸ್ವಾರಸ್ಯಕರವಾಗಿದೆ ಅಂತ ಮೂಗಿನ ಮೇಲೆ ಬೆರಳಿಟ್ಟು
ಕೊಳ್ಳ್ತಾ ಇದ್ದರು !
ಹೀಗೆ
ಒಮ್ಮೆ ಗಣಪತಿ ಹಬ್ಬ ದ ಬಗ್ಗೆ
ಹೇಳುತ್ತಾ ಹೇಗೆ ಗಣಪನ ಮೂರ್ತಿಯನ್ನು ತಂದು ವಿಜ್ರಂಭಣೆಯಿಂದ ಸ್ತಾಪಿಸಿ , ಪೂಜೆ ಸಲ್ಲಿಸಿ
ನಂತರ ನೀರಿನಲ್ಲಿ ವಿಸರ್ಜನೆ
ಮಾಡ್ತಿವಿ ಅಂತ ವಿವರಿಸಿದಾಗ , ಅವರು
ಆಶ್ಚರ್ಯ ದಿಂದ “ oh soo sad , ಹಾಗಾದ್ರೆ ಪಾಪ
ಮೂರ್ತಿ ನ್ನು ನೀರಿನಲ್ಲಿ
ಹಾಕ್ಬಿಡ್ತೀರಾ ? ( ಸುಮ್ನೆ ತಂದು ವೇಸ್ಟ್
ಮಾಡ್ಬಿಟ್ರಲ್ಲಾ ಅನ್ನ್ನೂ ಹಾಗೆ ಹೇಳಿದಾಗ ನನಗೂ ನಗು :) ಇನ್ನು ಇವುಗಳ ಬಗ್ಗೆ
ನನಗಿರುವ ತಿಳಿವಳಿಕೆ , ಜ್ಞಾನ ಬಂಡಾರ ಅವರ ಮುಂದೆ ಪ್ರದರ್ಶಿಸಿ ನನ್ನ ಬೆನ್ನನ್ನು ಸ್ವತಹ
ನಾನೇ ತಟ್ಟಿ ಕೊಳ್ಳುವ ಅವಕಾಶ ನನಗೆ :)
ಒಮ್ಮೊಮ್ಮೆ ನನಗೆ ಅದೇನು ನಿಮ್ಮ ದೇಶದಲ್ಲಿ
ಪವಿತ್ರ ನದಿಯಂತೆ ಗ್ಯಾನ್ಜಸ್ಗ್ಯಾ (ಗಂಗಾ ನದಿ )
ಅದರಲ್ಲಿ ಮನುಷ್ಯರ ಆಸ್ತಿಗಳನ್ನು ಹಾಕಿಬಿಡ್ತೀರಂತೆ !! ಏಕೆ ಹಾಗೆ ? ನಿಮ್ಮ
ಸಾಧುಗಳು ಏಕೆ ಮೈಯಲ್ಲಾ ಬೂದಿ
ಬಳಿದುಕೊಂಡು , ಇಷ್ಟುದ್ದಾ ಕೂದಲು ಬಿಟ್ಟ ಕೊಂಡಿರ್ತಾರಲ್ಲ್ಲಾ ....ಅಂತೆಲ್ಲಾ ನನ್ನ ತಲೇಲಿ
ಹುಳ ಬಿಡ್ತಾ ಇದ್ದ್ರು ! ( ಅವರು ಯಾವದೋ
ಕುಂಭ ಮೇಳದ ಸಾಕ್ಷ್ಯ ಚಿತ್ರಗಳನ್ನ ನೋಡಿರಬೇಕು ) ಅವರಿಗೆ ಸಮರ್ಪಕವಾದ ಉತ್ತರ ಕೊಡ್ತಾ ಕೊಡ್ತಾ ಅವರು ಬಿಟ್ಟ ಹುಳಾನಾ ಅವರ
ತಲೆಗೆ ಬಿಡ್ತಾ (ಕಚ್ಚಿಸ್ತಾ ) ಇದ್ದದ್ದು ಬೇರೆ ವಿಷಯ ಬಿಡಿ !
ಪಾಪ ಒಳ್ಳೆಯ ವ್ಯಕ್ತಿ , ಏನೋ ನಮ್ಮ
ಕೆಲವು ಧಾರ್ಮಿಕ ಆಚರಣೆ/ಪದ್ಧತಿ ಗಳನ್ನು ಕೇಳಿ
ತಿಳಿಯುವ ಕೂತುಹಲ ಅಷ್ಟೇ .! :)
ನಮ್ಮ
ಕಂಪನಿಯ ಮುಖ್ಯಸ್ತರು ಲೋಕಲ್ಲು , ಅರ್ಥಾತ್
ಸಂಯುಕ್ತ ಅರಬ್ ಸಂಸ್ಥಾನದವರೇ ! ಬಹಳ
ಶ್ರೀಮಂತ ಶೇಕ್ , ಆರಡಿ ಗಿಂತ ಎತ್ತರದ ಅಜಾನಬಾಹು ವ್ಯಕ್ತಿ . ಇನ್ನು ಅವರ ಹೆಸರೂ ಕೂಡ ಅಷ್ಟೇ ಉದ್ದ
, ಹೀಗಾಗಿ ನಾನು ಅವರ ಹೆಸರಲ್ಲಿ ಕೊನೆಯ ಒಂದು ಹೆಸರನ್ನು ಮಾತ್ರ ನೆನಪು
ಇಟ್ಟಕೊಂಡಿದ್ದೆ ! ಅರಬ ಧಿರಸುನ್ನು ಧರಸಿ ಅವರು ಗಂಬೀರವಾಗಿ ಗತ್ತಿನಿಂದ ನಡೆದು ಕಚೇರಿಯೊಳಗೆ ಬರುತ್ತಿದ್ದರೆ ( ಅವರಿಗಿಂತ ಮುಂಚೆಯೇ ಅವರ ಸೆಂಟಿನ ಪರಿಮಳ ದೂರದಿಂದಲೇ ಅವರು ಬರುತ್ತಿದ್ದ ಮುನ್ಸೂಚನೆ ಕೊಡುತ್ತಿತ್ತು :) , ಅವರ ಗಾಂಭೀರ್ಯ ತುಂಬಿದ
ನಡೆ /ನುಡಿಗಳು ನಮ್ಮೆಲ್ಲರಲ್ಲೂ ಅವರ ಬಗ್ಗೆ ಹೆಚ್ಚಿನ ಗೌರವ ಭಾವನೆಗಳನ್ನು ಮೂಡಿಸುತ್ತಿತ್ತು . ಆದರೆ
ಅವರು ಹೀಗೆ ಗಂಬೀರವಾಗಿ ನಡೆದುಕೊಂಡು ಕಚೇರಿಗೆ ಬರುತ್ತಿದ್ದದ್ದು
ಬರೀ ವಾರಕ್ಕೆರಡು ಅಥವಾ ಮೂರು ದಿನಗಳಷ್ಟೇ !
ಏನಾದರೂ ಮೀಟಂಗ್ ಹಾಗು ಇನ್ನಿತರ ಮಹತ್ತರ
ಕೆಲಸಗಳು ಇದ್ದಾಗಷ್ಟೇ ! .
ನಮ್ಮ
ಆಫೀಸಿನಲ್ಲಿ ಒಂದು ಚಿಕ್ಕ ಚೊಕ್ಕದಾದ ಅಡುಗೆ ಕೋಣೆ
ಇತ್ತು . ನಮ್ಮ ಆಫೀಸ್ ಬಾಯಿ ( office
boy) ನೇಪಾಳ ದವನು , ಬೆಳ್ಳಗೆ , ಚೀನಿಯರನ್ನು ಹೋಲುತ್ತಿದ್ದ . ವೇಳೆಗೆ ಸರಿಯಾಗಿ ಟೀ .
ಬ್ಲಾಕ್ ಟೀ , ಟರ್ಕಿಷ್ ಕಾಫೀ , ಇನ್ನು ನಮ್ಮ ಚೀನೀ ಮೇಡಂ ಗೆ ಚೀನಾದ ಸ್ಪೆಷಲ್ ಟೀ ಹೀಗೆ ಅನೇಕ ವಿಧವಾದ ಪಾನೀಯಗಳನ್ನು (ಬರೀ ಸಾಫ್ಟ್ ಡ್ರಿಂಕ್ಸ್ , ಬೇರೆ ಏನನ್ನೂ ಕಲ್ಪಿಸಕೊಳ್ಳಬೇಡಿ :) ಆ
ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಯಾಗಿ ಮಾಡಿ ತಂದು ಕೊಡುತ್ತಿದ್ದ .
ಒಳ್ಳೆಯ ಹುಡುಗ, ಶ್ರದ್ಧೆ , ಹಾಗು ಶಿಸ್ತಿನಿಂದ ಆಫೀಸಿನ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿರುತ್ತಿದ್ದ .ಅವನ್ನನ್ನು ನಮ್ಮ ಸಹದ್ಯೋಗಿಗಳು ಕೆಲವರು “ಕುರುಬ “ ಅಂತಲೂ ಇನ್ನು ಕೆಲವರು “ ಕಿರಬಾ “ ಅಂತಲೂ ಕರೀತಿದ್ದ್ರು .ನನಗೇನೂ ಈ ಹೆಸರು ಸ್ವಲ್ಪ ವಿಚಿತ್ರ ಅನಿಸಿತ್ತು ನಾ ಬಂದ ಹೊಸತರಲ್ಲಿ . ಹಾಗಾಗಿ ಅವನನ್ನು “ ನಿನ್ನ ( ನಿಜವಾದ ) ಹೆಸರೆನಪ್ಪಾ ? “ ಅಂದೇ . ಅವನೂ ನಗುತ್ತಾ “ ಮೇಡಂ ನನ್ನ ಹೆಸರು ಕೃಪಾ ಅಂತ , ಇವರ ಬಾಯಲ್ಲಿ ನನ್ನ ಹೆಸರು ಹೀಗಾಗಿದೆ ಅಷ್ಟೇ ! ನಿಮಗೆ ಗೊತ್ತಾಯಿತು ನೋಡಿ “ ಅಂದಾಗ ಸದ್ಯ ನನ್ನ ಹೆಸರನ್ನು ಅಷ್ಟು ಪರಿಯಾಗಿ ತಿರುಗಿಸಿಲ್ಲಾಪ್ಪ ಅಂತ ಸಮಾಧಾನ ಪಟ್ಕೊಂಡೆ !
ಒಳ್ಳೆಯ ಹುಡುಗ, ಶ್ರದ್ಧೆ , ಹಾಗು ಶಿಸ್ತಿನಿಂದ ಆಫೀಸಿನ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿರುತ್ತಿದ್ದ .ಅವನ್ನನ್ನು ನಮ್ಮ ಸಹದ್ಯೋಗಿಗಳು ಕೆಲವರು “ಕುರುಬ “ ಅಂತಲೂ ಇನ್ನು ಕೆಲವರು “ ಕಿರಬಾ “ ಅಂತಲೂ ಕರೀತಿದ್ದ್ರು .ನನಗೇನೂ ಈ ಹೆಸರು ಸ್ವಲ್ಪ ವಿಚಿತ್ರ ಅನಿಸಿತ್ತು ನಾ ಬಂದ ಹೊಸತರಲ್ಲಿ . ಹಾಗಾಗಿ ಅವನನ್ನು “ ನಿನ್ನ ( ನಿಜವಾದ ) ಹೆಸರೆನಪ್ಪಾ ? “ ಅಂದೇ . ಅವನೂ ನಗುತ್ತಾ “ ಮೇಡಂ ನನ್ನ ಹೆಸರು ಕೃಪಾ ಅಂತ , ಇವರ ಬಾಯಲ್ಲಿ ನನ್ನ ಹೆಸರು ಹೀಗಾಗಿದೆ ಅಷ್ಟೇ ! ನಿಮಗೆ ಗೊತ್ತಾಯಿತು ನೋಡಿ “ ಅಂದಾಗ ಸದ್ಯ ನನ್ನ ಹೆಸರನ್ನು ಅಷ್ಟು ಪರಿಯಾಗಿ ತಿರುಗಿಸಿಲ್ಲಾಪ್ಪ ಅಂತ ಸಮಾಧಾನ ಪಟ್ಕೊಂಡೆ !
ಆಗಲೇ ತಕ್ಷಣ ನೆನಪಾಗಿದ್ದು ನಮ್ಮ
ಆಫೀಸಿನ PRO ಆದ ಅಬ್ದುಲ್
ಬಾಸಿತ್ ನದು. ಪ್ಯಾಲೆಸ್ಟೈನ್ (PALESTINE ) ದೇಶದವನು . ಸದಾ ಹಸನ್ಮುಖಿ ,
ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುತ್ತ , ಸದಾ ಜೋಶ ತುಂಬಿದ ವ್ಯಕ್ತಿ .
ಕಚೇರಿಯಯೋಳಗಿದ್ದಾಗ ಎಲ್ಲರೊಂದಿಗೆ ಏನಾದರೂ ತಮಾಷೆಯಾಗಿ ಮಾತಾಡುತ್ತ ನಗಿಸುತ್ತಿದ್ದ
.
.
ನಮ್ಮ ಯೆಜಮನರು ಆತನಿಗೆ ಪರಿಚಯ , ಹಾಗಾಗಿ ನನ್ನನ್ನೂ “ ಮೇಡಂ ರವಿ ಅಂತಲೋ ಇಲ್ಲಾ ಒಮ್ಮೊಮ್ಮೆ ರವಿ ಮೇಡಂ “
ಅಂತ ಕರೀತಾಇದ್ದ . (ಅವನಿಗೆ ಅನಿಸಿರಬೇಕು , ನಾನೇ ನಮ್ಮವರಿಗೆ ತಕ್ಕ ಮೇಡಂ ಅಂತ :) ಇನ್ನೂ ಸಣ್ಣ ವಯಸ್ಸು ,ಆದರೆ ಅವನಿಗೆ ಆಗಲೇ ಮದುವೆಯಾಗಿ , ಮೂರು ಚಿಕ್ಕ ಚಿಕ್ಕ ಮುದ್ದಾದ
ಹೆಣ್ಣು ಮಕ್ಕಳಿಗೆ
ತಂದೆಯಾಗಿದ್ದ. , ಒಮ್ಮೆ
ನಮ್ಮ ಆಫೀಸ್ ಪಾರ್ಟಯಲ್ಲಿ ಸಂಸಾರ ಸಮೇತ ಬಂದಾಗ ,ನಾನು
ಅವನ ಮಕ್ಕಳನ್ನು ನೋಡಿ “ ಅಬ್ದುಲ್
ಬಾಸಿತ್ ನಿನ್ನ ಮಕ್ಕಳು ಒಂದರ್ಕಿಂತಾ ಒಂದು ಎಷ್ಟು
ಮುದ್ದಾಗಿವೆ ,ಅಂತ ಕರೆದು ನನ್ನ ಹತ್ತಿರ ಕೂಡಿಸಿಕೊಂಡೆ “ ಆಗ ಅವನು
“ “ “ಮೇಡಂ ಸರಿ ಹಾಗಾದ್ರೆ ಈ
ಮೂವರಲ್ಲಿ ಒಬ್ಳನ್ನ ನಿಮ್ಮ ಸೊಸೆ ಮಾಡ್ಕೊಂಡ ಭಾರತಕ್ಕೆ ಕರೆದುಕೊಂಡ್ ಹೋಗ್ಬಿಡಿ , ಅವಳನ್ನು ನೋಡುವ ನೆಪದಲ್ಲಿ ನಾನು ಭಾರತಕ್ಕೆ
ಬಂದ್ಬಿಡ್ತೀನಿ “ ಅಂತ ನಗುತ್ತಾ ಕಿಚಾಯಿಸಿದಾಗ.
ನಾನು “ ಒಹ್ ಅಂತೂ ನನಗೆ ಗಂಡು ಮಕ್ಕಳು ಇರೋದ್ ಗೊತ್ತಾಗಿ ಒಳ್ಳೆ ಐಡಿಯಾ ನೇ
ಕೊಡ್ತಾ ಇದ್ದೀರಾ ಬಿಡಿ “ ಅಂತ
ಉತ್ತರಿಸಿದರೂ ಆತ ಹೇಳಿದಂತೆನಾದ್ರೂ ಆದ್ರೆ ಹೇಗಿರತ್ತೆ ಅಂತ ಕಲ್ಪಿಸಿಕೊಂಡು ನಗು
ಬರದೆ ಇರಲಿಲ್ಲ :)
ನಮ್ಮ ಆಫೀಸಿನಲ್ಲಿ ಮಹಿಳಾ ಸಹದ್ಯೋಗಿಗಳ ಸಂಖ್ಯೆ ಕಡಿಮೆ . . ಅದರಲ್ಲಿ ಸಿರಿಯಾ ದೇಶದ ಒಬ್ಬ ಸುಂದರ ಹೆಣ್ಮಗಳಿದ್ದಳು ,ದಂತದ ಬೊಂಬೆಯ ಹಾಗೆ ತಿದ್ದಿ ತೀಡಿದ ಮೈ ಮಾಟ . ಹೆಸರು
“ಸಮಾ “ . interior design
ವಿಭಾಗದಲ್ಲಿ i ಕೆಲಸ ಮಾಡ್ತಾ ಇದ್ದಳು .
ನಾವಿಬ್ಬರೂ ಆಗಾಗ ಕುಶಲೋಪಚರಿ ವಿನಿಮಯ
ಮಾಡ್ಕೊಳ್ತಾ ಇದ್ದ್ವಿ , ಅವಳು ನಾ ಕೆಲಸಕ್ಕೆ
ಸೇರಿದ ಶುರುವಿನಲ್ಲಿ ಒಮ್ಮೆ
ತನ್ನ ಟಿಫನ್ ಬಾಕ್ಸಿನಲ್ಲಿದ್ದ ನಾನ್ -ವೆಜ್
ಆಹಾರವನ್ನ ನನ್ನೊಂದಿಗೆ ಹಂಚಿಕೊಳ್ಳಲು
ಬಂದಾಗ ನಾನು ( ಅಲ್ಲಿ ನಾನೊಬ್ಬಳೇ !)
ಸಸ್ಯಹಾರಿ ಅಂತ ಗೊತ್ತಾಗಿ ,ಅಯ್ಯೋ ಮೀನು
ಕೂಡ ತಿನ್ನಲ್ವಾ ಪಾಪ ! ಆದರೆ ಮೀನು ವೆಜ್
ಅಲ್ವಾ ! “ ಅಂತ ಬೇಜಾರು ಮಾಡಿಕೊಂಡಾಗ
ನಾನು ನಕ್ಕು “ ಸಮಾ” ಮೀನು ವೆಜ್ ಇರಬಹುದು , ಆದರೆ ನಾನು ಮೀನನ್ನು ತಿಂದರೆ (ನಮಗೆ
) ಅದು ನಾನ್ ವೇಜ್ ಅಂದಾಗ ಅವಳಿಗೂ ನಗು !
ಒಮ್ಮೆ ಅವಳು
ಹೋಗುತ್ತಿದ್ದ ಕ್ಲಬ್ಬೊಂದರ , ಸಾಂಸ್ಕೃತಿಕ
ಕಾರ್ಯಕ್ರಮದಲ್ಲಿ ಅವಳು
ಪಾಲ್ಗೊಂಡಿದ್ದಾಗ , ಆ ಕಾರ್ಯಕ್ರಮಕ್ಕೆ ಭಾರತೀಯ
ಉಡುಗೆಯನ್ನು ದರಸುವ ಅವಶ್ಯಕತೆ ಒದಗಿ
ಬಂದಿತ್ತು .. ಅವಳ ಭಾರತೀಯ ಗೆಳತಿ ನಾನೇ ಆಗಿದ್ದರಿಂದ ನನ್ನ ಬಳಿಗೆ ಬಂದು “ ಆರತಿ , ದಯವಿಟ್ಟು ನೀವು ಏನು ಅಂದುಕೊಳ್ಳ ದ್ದಿದ್ದರೆ ನಿನ್ನ
ಯಾವುದಾದರೂ ಗ್ರಂಡಾಗಿರುವ ಸ್ಯಾರಿ ನನಗೆ ಒಂದು ದಿನ ಮಟ್ಟಿಗೆ
ಬಾಡಿಗೆಗೆ ಕೊಡ್ತೀಯ ? “ ಅಂತ
ಕೇಳಿದಾಗ ನನಗೆ ನಗು . ನಾನು “ಅಯ್ಯೋ ಧಾರಾಳವಾಗಿ ಕೊಡ್ತೀನಿ , ರೆಂಟು
/ಬಾಡಿಗೆ ಏನೂ ಬೇಡಮ್ಮ “ ಅಂದೆ . “
ಒಹ್ ತುಂಬಾ ಧನ್ಯವಾದಗಳು ! ಹಾಗಿದ್ರೆ ಸರಿ ನಾಳೇನೆ ಕಾರ್ಯಕ್ರಮ , ನನಗೆ ನೀವೇ ಸೀರೆ
ಉಡಿಸಿ ಬೇಕು ಪ್ಲೀಜ್ “ ಅಂತ ವಿನಂತಿಸಿ
, ನನ್ನಿಂದ ಅಸ್ತು ಅಂತ ಅನಿಸಿಕೊಂಡ ಮೇಲೆ
ನಿರಾಳವಾಗಿ “ಬಾಯ್ ಆರತಿ ತುಂಬಾ
ಧನ್ಯವಾದಗಳು “ ಅಂತ ಮುದ್ದಾಗಿ ವಿದಾಯ ಹೇಳಿ ಹೊರನಡೆದಳು .
ಸರಿ ನನ್ನ
ಒಂದು ಗ್ರಾಂಡ್ ಆಗುರುವ ಸೀರೆ ಹಿಡಿದು
ಮಾರನೆಯ ದಿನ ಆಫೀಸಿಗೆ ಬಂದಾಗ ಆಗಲೇ ಅವಳು
ಚಂದದ ಬಳೆ ತೊಟ್ಟು , .ಮೇಕ್ಅಪ್ ಮಾಡಿಕೊಂಡು
ತಯಾರಾಗಿ ಕಾಯ್ತಾ ಇರುವುದು ನೋಡಿ ನಾನು ತಡ ಮಾಡದೆ ಅವಳ
ಚೇಂಬರ್ ಗೆ ಕಾಲಿಟ್ಟೆ . ಅಂದು ಅವಳ
ಕೋಣೆ ನಮ್ಮ ನಾಟಕದ ಗ್ರೀನ್ ರೂಂ ಆಗಿ ಮಾರ್ಪಾಡಾಯಿತು ,ಅವಳಿಗೆ
ನನ್ನದೇ ಒಂದು ರೆವಿಕೆ ಅಡ್ಜಸ್ಟ್ ಮಾಡಿ
, ನೀಟಾಗಿ ಸೇರಿ ಉಡಿಸಿ , ಬಿಂದಿ ಇಟ್ಟು
( ವಧುವಿನಂತೆ ) ಅವಳನ್ನು ಹೊರಗೆ ಕರೆ ತಂದಾಗ , ಇನ್ನಿತರ
ಅರಬ್ ಸಹದ್ಯೋಗಿಗಳು ,
ಅವಳನ್ನೇ ನೋಡುತ್ತಾ ಕಣ್ಣಲ್ಲೇ ನಕ್ಕು “
ವಾಹ್ , ಇದೇನು ಅರ್ರಾ....ಥಿ , ಸಮಾಳನ್ನು
ಅಪ್ಪಟ ಭಾರತೀಯಳನ್ನಾಗಿ
ಮಾಡಿಬಿಟ್ಟಿದ್ದೀರಲ್ಲಾ ಸೂಪರ್ “ ಅಂದಾಗ
ನನಗೆ ಏನೋ ಹುಮ್ಮಸ್ಸು . ಅವಳು ಪದೆ
ಪದೆ “ ಬಹುತ್ ಶುಕ್ರಿಯ ಆರತಿ ,
ಅಂತ ತಾ ಕಲಿತ ಒಂದೆರಡು ಹಿಂದಿ ಶಬ್ದಗಳನ್ನು ನನ್ನ
ಮೇಲೆ ಪ್ರಯೋಗಿಸಿ , ಸೇರೆಯನ್ನು ಮೇಲೆ
ಹಿಡುದು ಕಷ್ಟಪಟ್ಟು ಸಂಭಾಳಿಸಿಕೊಂಡು ನಡೆದು ಹೋಗುವುದು ನೋಡಿ ನನಗೂ ನಗು :)
(ಸದ್ಯ ಕಾರ್ಯಕ್ರಮ ಮುಗಿಯುವವರೆಗೂ ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ )
(ಸದ್ಯ ಕಾರ್ಯಕ್ರಮ ಮುಗಿಯುವವರೆಗೂ ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ )
ಈ ಮದ್ಯೆ ಒಂದು ದಿನ ನಮ್ಮ ಕಚೇರಿಯಲ್ಲಿ ಅಕ್ಕೋಟೆಂಟ್ ಆಗಿದ್ದ ಹುಸ್ಸೈನ್ (
ಕೇರಳದವರು , ) . ನನಗೆ ಒಂದು ಸುದ್ದ್ದಿ ತಂದರು,ನಾನು ಮೊದಲೇ ಹೇಳಿದಂತೆ
ನಾವಿಬ್ಬರೇ ಭಾರತೀಯ ಮೂಲದವರು ನಮ್ಮ ಕಚೇರಿಯಲ್ಲಿ
. ಅಂದು ಅವರು ಉತ್ಸಾಹದಿಂದ “
ಆರದಿ ನಿಮಗೆ ಗೊತ್ತಾ ? ನಮ್ಮ
ಆಫೀಸಿಗೆ ಒಬ್ಬ ಹೊಸ ಅಪರೇಷನ್ ಮ್ಯಾನೇಜರ್ ( operation manager ) ಸೇರ್ಪಡೆ ಆಗ್ತಾ ಇದ್ದಾರಂತೆ ! ಹೆಸರು
“ಸಮೀರ್ ಆಚಕರ್ ಅಂತೆ !
ನಾನಾಗ ತಕ್ಷಣ “ ಸಮೀರ್
ಆಚಾರ್ “ ಇರಬಹುದು ಅನ್ಸತ್ತೆ ಹುಸ್ಸೈನ್ ,
ಬಾರತೀಯ ಹೆಸರು ಇದ್ದ ಹಾಗಿದೆ “ ಅಂದೇ ! ಅವರು
ಹೇಳಿದ ಹೆಸರಿನ ಸುತ್ತ ನನ್ನ ಊಹಿಸುವಿಕೆ ಆ
ಕ್ಷಣದಿಂದಲೇ ಪ್ರಾರಂಭ ವಾಯಿತು . ಒಹ್ ಸಮೀರ್
ಆಚಾರ್ ಅಂದ್ರೆ ಕರ್ನಾಟಕದವರು
ಇರಬಹುದಲ್ಲವೇ ! ಅಂದುಕೊಳ್ಳುತ್ತಾ ಮನಸ್ಸಿಗೆ ಒಂಥರಾ ಖುಷಿ ಆಯಿತು , ಹಾಗೆ ಮನಸ್ಸಿನಲ್ಲೇ ಮಂಡಿಗೆ
ತಿನ್ನುತ್ತ ಮನೆತನಕ ಬಂದು , ಮನೆಯಲ್ಲೂ ನಮ್ಮವರಿಗೆ ಈ ಸುದ್ದಿ ಯನ್ನ ಬಿತ್ತರಿಸಿದಾಗ ಅವರೂ
ಆಶ್ಚರ್ಯ ,ಖುಷಿ ಒಟ್ಟೆಗೆ ವ್ಯಕ್ತ ಪಡಿಸಿದ್ದರು
! ಈ ಅರಬರೆ ತುಂಬಿದ ಆಫೀಸಿನಲ್ಲಿ
ನಮ್ಮ ಕನ್ನಡವರಿದ್ದರೆ ಎಷ್ಟು ಚೆನ್ನ ಎನ್ನುವ
ಸಂತಸದ ಭಾವನೆಯನ್ನು ನನ್ನೊಳಗೆ ಅರಳಿ ಹೂವಾಗಿತ್ತು , ಅಂತೂ
ನಮ್ಮ ಹೊಸ ಮ್ಯಾನೇಜರ್ ಆಗಮಿಸುವ
ಘಳಿಗೆ ಬಂದೆ ಬಿಟ್ಟಿತು ,ನನಗೋ ಅವರನ್ನು ನೋಡುವ
ಕೊತೂಹಲ ಬೆಳೆದು ಹೆಮ್ಮರವಾಗಿ ನಿಂತ್ತಿತ್ತು !
ಅಂದು ಬೆಳಿಗ್ಗೆ ಒಂಬತ್ತರ ಸುಮಾರಿಗೆ ,ಸೂಟು /ಟೈ
ನಲ್ಲಿ ಆಗಷ್ಟೇ ಬ್ಯುಸಿನೆಸ್ಸ್ ಮೀಟಿಂಗ್ ನಿಂದ
ಬಂದಂತೆ , ಒಬ್ಬ ಎತ್ತರದ
ಸುಂದರ ವ್ಯಕ್ತಿ ಆಫೀಸಿನೊಳಗೆ ಕಾಲಿಟ್ಟರು .
ನಮ್ಮ ಸಹದ್ಯೋಗಿಗಳು ಅವರನ್ನು ಸ್ವಾಗತಿಸಿ ಹೂ ಗುಚ್ಚಳನ್ನು ಕೊಟ್ಟ ನಂತರ , ನಮ್ಮ
ಮ್ಯಾನೇಜರ್ ಅವರನ್ನ ಪರಚಯಿಸುತ್ತ “ ಫ್ರೆಂಡ್ಸ್
ಇವರು ಸಾಮೇರ್ ಅಚಾಕರ್ “ (
saamer achaakar “)
ಅಂತ ನಮ್ಮ ಹೊಸ ಅಪರೇಷನ್ ಮ್ಯಾನೇಜರ್ , ಲೆಬಿನಾನಿನ ದೇಶದವರು “ !!!! ಅಂದರು
. ನಾನು ಅವರಿಗೆ “ ಹಲೋ ವೆಲ್ಕಂ ಸರ್ “ ಅಂತ ನಕ್ಕು ಹೇಳಿದರೂ , ನನ್ನ ಉತ್ಸಾಹ ಜರ್ರನೆ ಇಳಿದು , ಮನದಲ್ಲಿ ನಿಧಾನವಾಗಿ ನಿರಾಶೆಯ ಕಾರ್ಮೋಡಗಳು ಹೆಪ್ಪುಗಟ್ಟಲಿಕ್ಕೆ
ಶುರು ಮಾಡಿದ್ದವು ! . ಇನ್ನು
ನಾ ಕಟ್ಟಿಕೊಂಡಿದ್ದ ಊಹೆಯ ಸೌಧ ಗ್ರೌಂಡ್ ಜೇರೊ
ಆಗಿ ಮಲಗಿ ಬಿಟ್ಟಿತ್ತು ಅಂತ ಬೇರೆ
ಹೇಳಬೇಕೆ :)
ಆದರೆ ಆ ( ಪೆದ್ದ) ಭಾವನೆಗಳೆಲ್ಲಾ ಆ ಕ್ಷಣಕ್ಕಷ್ಟೇ ಜಾಮಯಿಸಿಕೊಂಡು ನಿಧಾನವಾಗಿ ಕರಗಿ ನೀರಾಗಿ ಹರಿದು ಹೋಯಿತು ,ಅಷ್ಟೇ ಅಲ್ಲದೆ ನನಗೆ ನನ್ನ ಊಹಾಪೋಹಕ್ಕೆ ನನ್ನ ಮೇಲೇ ನನಗೆ ನಗು ಬರದೆ ಇರಲಿಲ್ಲ ! . ಆದರೆ ಆಸೆ ಪಡುವುದರಲ್ಲಿ ತಪ್ಪೇನು ಇಲ್ಲ ಅಲ್ವೇನ್ರಿ :) ?
ಇರಲಿ , ಈ ನಮ್ಮ ಹೊಸ Operation manager ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ ಕಾರ್ಯ ಕ್ಷಮತೆ ,ಸ್ನೇಹ ಸ್ವಭಾವದಿಂದ ನಮೆಲ್ಲರ ಮನಸನ್ನ ಬಹಳ ಶೀಘ್ರದಲ್ಲೇ ಗೆದ್ದು ಬಿಟ್ಟಿರು .
ಇರಲಿ , ಈ ನಮ್ಮ ಹೊಸ Operation manager ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ ಕಾರ್ಯ ಕ್ಷಮತೆ ,ಸ್ನೇಹ ಸ್ವಭಾವದಿಂದ ನಮೆಲ್ಲರ ಮನಸನ್ನ ಬಹಳ ಶೀಘ್ರದಲ್ಲೇ ಗೆದ್ದು ಬಿಟ್ಟಿರು .
ನನ್ನ ದಿನಚರಿಗಳು ಏರು ಪೇರಿಲ್ಲದೆ ಸಾಗಿತ್ತು . ಆಗ ಜುಲೈ ತಿಂಗಳು , ಆ ವರ್ಷ ಕಾರಣಾತರಗಳಿಂದ ನಾವು
ನಮ್ಮ ವಾರ್ಷಿಕ ರಜೆಗೆ ಭಾರತಕ್ಕೆ ಹೋಗಲಾಗಲಿಲ್ಲ . ಆಗ ಶ್ರಾವಣ ಮಾಸ ಶುರುವಾಗಿತ್ತು , ಅಂದು ನಾಗರ ಪಂಚಮಿ
ಹಬ್ಬ . ಈ ಹಬ್ಬಕ್ಕೆ ನನಗೆ ತವರಿಗೆ
ಹೋಗುವ ರೂಡಿ .ಹೀಗಾಗಿ ಅಮ್ಮನ ನೆನಪಾಗಿ ಯಾಕೋ
ಮನಸ್ಸಿಗೆ ಬೇಸರವಾಯಿತು . ಬೆಂಗಳೂರಿನಲ್ಲಿ
ನಾವುಗಳು ಎಷ್ಟು ಶೃದ್ಧಾ ಭಕ್ತಿಯಿಂದ ಹಾಗು ಉತ್ಸಾಹದಿಂದ ಈ ಎಲ್ಲ ಪಾರಂಪರಿಕ
ಹಬ್ಬಗಳನ್ನು ಆಚರಿಸ್ತಾ ಇದ್ದದ್ದು
ನೆನಪಿಸಿಕೊಂಡು ತಾಯಿನಾಡಿನ ಸೆಳೆತ ತೀವ್ರವಾಗಿ ಕಾಡಿತು. ಆದರೆ ನಾನು ಇಲ್ಲಿ ಬಂದ ಮೇಲೂ ಇವುಗಳನ್ನೆಲ್ಲಾ ಯಥಾಶಕ್ತಿಯಾಗಿ
ಆಚರಿಸಿಕೊಂಡು ಬಂದಿದ್ದೆ. ಹಾಗೇನೆ ಇದರಲ್ಲಿ ನನ್ನ ಸ್ವಯಂ ಪ್ರೇರಿತ ಆಸಕ್ತಿ ,ಬೆಳದುಬಂದ ಬಂದ ಸಂಸ್ಕೃತಿಯೂ ಕಾರಣ
ವಿರಬಹುದು . ಇನ್ನೊಂದೆಂದರೆ ಇಲ್ಲಿ ಎಲ್ಲಾ ರೀತಿಯ ಹಬ್ಬದ
ಸಾಮಗ್ರಿಗಳು / ಹೂವು .ಹಣ್ಣುಗಳು ಯಥೇಚ್ಚವಾಗಿ ಸಿಕ್ಕು ಹಬ್ಬವನ್ನ ಆಚರಿಸಲು ಅನುಕೂಲವಾಗಿತ್ತು. ಇನ್ನು
ನಮ್ಮ ಅಕ್ಕ ಪಕ್ಕ ಇದ್ದ ಕನ್ನಡ ಬಳಗದವರ ಜೊತೆ ಸೇರಿ ಸಾಂಪ್ರದಾಯಕವಾಗಿ ಕೆಲವು ಆಚರಣೆಗಳನ್ನ ಅವರೊಂದಿಗೆ
ಸೇರಿ ಸಂಭ್ರಮಿಸುವ ಸದವಕಾಶ ,ಸುಯೋಗ ಕೂಡ ನನಗೆ ಒದಗಿ ಬಂದಿತ್ತು .
ಸರಿ ಅಂದು ನಾಗರ
ಪಂಚಮಿಯಾದ್ದರಿಂದ ನಾನೂ ಸಹ ಭಕ್ತಿಯಿಂದ
ನಾಗಪ್ಪನಿಗೆ ಹಾಲೆರೆದು , ತಂಬಿಟ್ಟು
ಉಂಡೆಗಳನ್ನು ಅರ್ಪಿಸಿ , ಪೂಜೇ
ಮುಗಿಸಿ ಆಫೀಸಿಗೆ ಹೊರಟೆ . ಆಗ ನನ್ನ ಲೆಬನೀಸ್
ಮಿತ್ರರು ( ಮೊದಲು ಇಲ್ಲಿ ನಿಮಗೆ ಪರಿಚಯಿಸಿದ್ದ ಪ್ರಾಜೆಕ್ಟ್ ಮಾನೇಜರ್ ,
ನೆನಪಿದೆಯಲ್ವ ! ನನ್ನು ಕುರಿತು “ ಒಹ್ ಅರ್ರಾ ....ತೀ ,ಏನು ಇವತ್ತು ಭಾರತೀಯ ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ ! ತುಂಬಾ ಚನ್ನಾಗಿದೆ ,! ಇದು ನಿಮಗೆ
ಯಾವ ಈದ್ ? ಅಂತ ತಮಾಷೆ ಮಾಡಿದಾಗ , ನನಗೂ ಇವರಿಗೆ
ಸ್ವಲ್ಪ ತಮಾಷೆ ಮಾಡಿನೋಡೋಣಾ ಅಂತ ಅನಿಸಿತು . ನಾನು “ ಸರ್
ಇವತ್ತು snake god “ (ನಾಗಪ್ಪನ) ಹಬ್ಬ
! ಅಂದಾಗ ಅವರಿಗೆ ಒಂಥರಾ ಶಾಕ್ ! ಆಗ
ಅವರು “ ಏನು ! ನಿಮಗೆ ಹಾವೂ ಕೊಡಾ ದೇವರೇ “ ? ಅಂತ
ಭಯ ಮಿಶ್ರಿತ ಆಶ್ಚರ್ಯದ ಕಣ್ಣುಗಳನ್ನು ದೊಡ್ಡದಾಗಿ
ಹಿಗ್ಗಿಸಿ ಕೇಳಿದರು. ! ನಾನು
“ ಹೌ ದು ಸರ್ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು ವಿಶೇಷವಾದವು , ಅವುಗಳು ನಮಗೆ ದೇವರ
ಸ್ವರೂಪ “ ಅಂದೆ . ಅವರು
ಸುಮ್ನೆ ಇರದೇ , ಗೊತ್ತೇ ಇದ್ಯಲ್ಲ
ಅವರಿಗೆ ಇನ್ನಷ್ಟು ತಿಳಿಯುವ ಕೂತೂಹಲ
ಎಂದಿನಂತೆ ! “ ಸರಿ ಈ ಹಬ್ಬಾನಾ
ಹೇಗೆ ಆಚರಸ್ತೀರಾ ? “ ಅಂತ ಆಸಕ್ತಿಯಿಂದ ಕೇಳಿದ್ರು . ನಾನಾಗ “
ಸರ್ ನಾವು ಸ್ನೇಕ ಗಾಡ್ನನ್ನು ಭಕ್ತಿಯಿಂದ ಪೂಜಿಸಿ , ಹಾಲೆರದು , ಸ್ವೀಟ್ಟ್ಗಳನ್ನು ಅರ್ಪಿಸ್ತೇವೆ ಅಂದೆ !”
ಅವರು ಆಗ ಜೀವಂತ ಹಾವನ್ನೇ ಕಲ್ಪಿಸಿಕೊಂಡು
, ನನ್ನನ್ನು ಕಾಡಿನಲ್ಲಿ
ಬೇಟೆಗಾರನ ರೊಪದಲ್ಲಿ ಚಿತ್ರಿಸಿಕೊಂಡರೇನೂ ಅನ್ಸತ್ತೆ
! ,ಅವರಿಗೇಕೂ ನಾನು
ಹೇಳುತ್ತಿರುವುದು ಮನದಟ್ಟಾಗಲಿಲ್ಲ . !
ಅದರ ಬದಲು ಅವರ ಮನವೇ ದಟ್ಟ ಕಾಡಾಗಿ
ಅಲ್ಲಲ್ಲಿ ಆಶ್ಚರ್ಯದ ಮುಳ್ಳುಗಳೇ ಎದ್ದು ನಿಂತ ಹಾಗೆ ನನಗೆ ಕಂಡಿತು , ನಾನು ಒಳಗೊಳಗೇ
ನಗು ತಡೆದು ಕೊಂಡು ಮುಂದುವರಿಸುತ್ತಾ “
ಸರ್ ಪೂಜೆ ಎಲ್ಲಾ ಮುಗಿಸಿ
ನ್ಯೈವೇದ್ಯಾ ( ಈ ಶಬ್ದ ಅವರಿಗೆ ವೇದ್ಯ
ವಾಗುವ ವಿವರಿಸಿ )
ವಾದ ನಂತರ ನಾವೂ ಸ್ವೀಕರಸ್ತೀವಿ .” ಅಂದೆ . ಅವರು ಸೀಟಿನಿಂದ ಚಂಗನೆ ಮೇಲೆದ್ದು “ you
u mean the snake ? “ ಅಂತ ಘಾಬರಿಯಾಗಿ ಕೇಳಿದ್ರು :) ( ಅವರಿಗೆ ಚೀನಾ ದೇಶಾ ನೆನಪಾಗಿರಬೇಕು, ) ಆಗಾ ನನಗೆ ನಗು ತಡೆಯಲು ಆಗಲೇ ಇಲ್ಲ “
ಸರ್ ಅಲ್ಲ ! ದೇವರಿಗೆ ಅರ್ಪಿತವಾಗಿರುವ ಸ್ವೀಟ್ಸ್
ತಿಂತೀವಿ “ ಅಂದೇ (ನನ್ನ ತಮಾಷೆ ಹೀಗೆ ಕ್ಲಾಮಾಕ್ಸ್ ( climax )
ಹಂತಕ್ಕ ತಲುಪಿದ್ದು ಕಂಡು ನನಗೆ
ಆಶ್ಚರ್ಯ ಒಂದು ಕಡೆ ಯಾದರೆ ಉಕ್ಕಿ
ಬರುತ್ತಿರುವ ನಗು ಇನ್ನೊಂದು ಕಡೆ ! ಆಗ ಅವರೂ ಜೋರಾಗಿ ನಗುತ್ತಾ “ ಓಹೋ
ಅರ್ರಾ ....ತಿ ನನಗೆ ತಮಾಷೆ ಮಾಡ್ತಾ
ಇದ್ದೀರಾ ! ಪರವಾಗಿಲ್ಲಾ ನೀವು ! ಆದರೆ ನೀವು
ಎಲ್ಲಾ ದೇವರಗಳನ್ನು ಮೂರ್ತಿಗಳ ರೂಪದಲ್ಲಿ
ಪೂಜಿಸ್ತೀರಾ ಅಲ್ವಾ , ? ನನಗೆ ಗೊತ್ತು ಬಿಡಿ , ನೀವು ಮೊದಲೇ ನನಗೆ ಇದರ ಬಗ್ಗೆ ಹೇಳಿದ್ದೀರಾ ಅಲ್ವಾ
? ನಾನೂ ನಿಮಗೆ ಸ್ವಲ್ಪ ತಮಾಷೆ
ಮಾಡಿ ನೋಡ್ತಾ ಇದ್ದೆ ಅಷ್ಟೇ “ :) ಅಂತ ಕಿಚಾಯಿಸಿದಾಗ ಇಬ್ಬರೂ ಮನಸಾರೆ ನಕ್ಕು ಬಿಟ್ಟೆವು !
ಹೀಗೇ
ಮನದ ಖಜಾನೆಯಿಂದ ನೆನಪುಗಳನ್ನ ಕೆದಕುತ್ತಾ
ಹೋದಾಗ , ಅವುಗಳ ಜೊತೆಯಲ್ಲೇ ಈ
ಸ್ವಾರಸ್ಯ ಕರ ಅನುಭವಗಳೂ ಮುತ್ತುಗಳಂತೆ ಒಂದೊಂದೇ ಹೊಳೆಯುತ್ತಾ ನನ್ನ ಕೆಣಕಲು ,
ನನ್ನ ತುಟಿಯ ಮೇಲೆ ಮಂದಹಾಸ, ಮೂಡಿ ,ಮನಸ್ಸಿಗೆ ಮಾತ್ರ ಕಚಗುಳಿ ಇಟ್ಟ ಅನುಭವ !
ಆರತಿ ಘಟಿಕಾರ್
ದುಬೈ
nenapugala maate madhura.. nice Arathi :)
ReplyDeleteThis comment has been removed by the author.
ReplyDeletedhanyavaadagalu anitha :)
ReplyDelete